Thursday 22 March 2012

ಎಲ್ಲರಿಗೂ ಶುಭ ತರಲಿ ಚಾಂದ್ರಮಾನ ಯುಗಾದಿ...


ಪಾಡ್ಯದ ರವಿ ಉದಯಿಸಿರಲು..
ಚೈತ್ರದ ಬಾಗಿಲಲ್ಲಿ..
ಹೊಸ ಚಿಗುರ ರಂಗವಲ್ಲಿ...

ಹೊಸ ಸಂವತ್ಸರದ ಬೆಳಕಲ್ಲಿ 
ಸಿಹಿಕಹಿಗಳ ಹೂರಣವಿಹುದು
ಬೇವು- ಬೆಲ್ಲಗಳ ಮಿಶ್ರಣದಲ್ಲಿ..

ಹಳೆ ಎಲೆಗಳ ಉದುರಿಸಿ 
ಹೊಸ ಚಿಗುರ ತೊಟ್ಟು..
ಪ್ರಕೃತಿ ಸಂಭ್ರಮಿಸುವಂದದಿ...
.
ಹಳೆಯ ನೋವೆಲ್ಲವ ಮರೆಸಿ 
ಹೊಸ ಆಶಯಗಳ ಕೊಟ್ಟು 
ಎಲ್ಲರಿಗೂ ಶುಭ ತರಲಿ 
ಚಾಂದ್ರಮಾನ ಯುಗಾದಿ... 


Tuesday 6 March 2012

ಮೌನ ಶಿಲೆ....


ನಿನ್ನ ಕಣ್ಣುಗಳೇ ತಾವರೆಗಳು ಎಂದವನು
      ಬಾಳನ್ನು ಕಣ್ಣಿರ ಕೊಳವಾಗಿಸಿ  ಬಿಟ್ಟೆ...
      ನಿನ್ನ ಮಾತೆ ಮುತ್ತುಗಳು ಎಂದವನು 
      ಮೌನ ಶಿಲೆಯಾಗಿಸಿ ಬಿಟ್ಟೆ...
      ನಮ್ಮಿಬ್ಬರ ನಡುವೆ ಕಂದಕಗಳೇ 
ಬರಲಾರವು ಎಂದವನು
     ವಂಚನೆ, ಅಪನಂಬಿಕೆಯ  
ಪರ್ವತವನ್ನೇ ಎಬ್ಬಿಸಿಬಿಟ್ಟೆ.... !!!

Friday 2 March 2012

ಮಧುಪಾತ್ರೆ....


ಪ್ರತಿ  ಹೂವೆದೆಯ ಚುಂಬಿಸಿ..
ಸಂಭ್ರಮದಿ ಭ್ರಮರ 
ಮಕರಂದವ  ಹೀರುವಂದದಿ..
ಪ್ರತಿ ಎದೆಯಾಳದಿ ನಗು ಸುರಿದು 
ಒಲವ ಬಿತ್ತಿ ಬೆಳೆಯಲು 
ಜೇನಿಗಿಂತ ಸಿಹಿ ನೋಡು 
ಬದುಕೆಂಬ ಮಧುಪಾತ್ರೆ....